be good to all is not possible. to know SELF is the best way to know the world. So, in search of the ONE or the ONE WHO IS ALL, or NO-ONE......... what was opened to me is all being shared here.
who ever is either Bharatiya or Indian will know angregi invariably, further by choice and interest can dig deeper......
||ಕೃಣ್ವಂತೋ ವಿಶ್ವಮಾರ್ಯಂ||
ಎಲ್ಲರನ್ನೂ 'ಆರ್ಯ'ರನ್ನಾಗಿಸೋಣ ಎನ್ನುವ ಉದಾತ್ತ ಮನೋಭಾವದ ಆರ್ಯರ ಭೂಮಿಯಲ್ಲಿ ಜನಿಸಿರುವುದೇ ಒಂದು ಭಾಗ್ಯ.
ಪ್ರಹ್ಲಾದನೂ ಆರ್ಯನೆ, ರಾಮನೂ ಅರ್ಯನೆ, ಕೃಷ್ಣನೂ ಆರ್ಯನೇ.... ಅರ್ಯನೆಂದರೆ ಉತ್ತಮನೆಂದು ತಿಳಿಯಬೇಕು.
ನಾನು ಕಂಡ ನನ್ನ ತಾತ, ತಂದೆಯರು ಆರ್ಯರೆ?
ಪ್ರಪಂಚವು ಅಂದಿನಿಂದ ಇಂದಿನವರೆಗೆ ಬಹಳ ದೂರ ನಡೆದಿದೆ. ಹಾಗಿಯೇ ಕಳಿಸಿಕೊಟ್ಟ ವಿದ್ಯೆಯನ್ನು ಅಭ್ಯಾಸ ಮಾಡದೆ ಅದನ್ನು ಸೂಕ್ತ ರೀತಿಯಲ್ಲಿ ಅರಿಯದೆ ತಮ್ಮ ಸ್ವಾರ್ಥಕ್ಕೆಂದು ಧರ್ಮಕ್ಕೆ ತಮಗೆ ಅನುಕೂಲವಾಗುವ ಅರ್ಥವನ್ನು ಕೊಟ್ಟು ದುರುಪಯೋಗ ಮಾಡಿಕೊಂಡಿದ್ದರ ಫಲ, ಕಿರಿಯರು ತಪ್ಪು ಮಾಡುವುದು ಅವರನ್ನು ಮಾತ್ರ ಭಾದಿಸಿದರೆ, ಹೊಣೆಗಾರಿಕೆಯ ಸ್ಥಾನದಲ್ಲಿರುವವರು ಸಣ್ಣ ತಪ್ಪು ಮಾಡಿದರೂ ಅಸಂಖ್ಯ ಅಮಾಯಕರಿಗೆ ಬಹಳವೇ ನೋವು, ವೇದನೆ, ಹಿಂಸೆ, ದುಃಖಗಳನ್ನೂ ನೀಡುವುದು. ಹೀಗಾಗಿ ನಾನು ಏನು ಮಾಡಿದರೂ ನಡೆಯುವುದು ಎಂದುಕೊಳ್ಳುವವನು ಅತ್ಯಂತ ಸ್ವಾರ್ಥಿ ಹಾಗು ಸಂಕುಚಿತ ಮನೋಭಾವದವನಾಗಿರುತ್ತಾನೆ. ಎಲ್ಲರ ಜೀವನವೂ ಹೀಗೆಯೇ ಆರಂಭವಾಗುವುದು ಆದರೂ ಕರ್ಮ - ಫಲ ಸಿದ್ಧಾಂತದ ನಿಯಮಾನುಸಾರ ಅವರ ಕರ್ಮಗಳಿಗೆ ದೊರೆಯಬೇಕಾದ ಫಲಗಳು ದೊರೆಯುತ್ತಲೇ ಇರುತ್ತವೆ. ಇದೂ ಅರಿವಿಗೆ ಬರಲು ಜೀವನವು ನೀಡುವ ಪೆಟ್ಟುಗಳು ಸಹಾಯಮಾಡುತ್ತವೆ.
ಹೀಗೆ ಬರ್ತಾ ಬರ್ತಾ ಅನೇಕ ಕಾವಲು ದಾರಿಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಇಂದು ನನ್ನನ್ನು ಇಲ್ಲಿ ನಿಲ್ಲಿಸಿದೆ. ನಡುವಿನ ಎಲ್ಲ ಪುಟಗಳನ್ನೂ ಬಿಚ್ಚಿಡಲು ಬಹಳವೇ ಕಷ್ಟವಾಗುತ್ತದಾದ್ದರಿಂದ ಸಮಯ ಒದಗಿದಾಗ ಅಲ್ಲಲ್ಲಿ ನೆನಪಿಗೆ ಒದಗಿದಷ್ಟನ್ನು ಹಂಚಿಕೊಳ್ಳುವೆ.
ನನ್ನ ಇಂದಿನ ಈ 'ಬ್ಲಾಗರ್' ಪುಟಕ್ಕೆ ತಂದದ್ದು ಸನ್ಮಾನ್ಯ ಶ್ರೀಯುತ ರಾಜೀವ್ ಮಲ್ಹೋತ್ರರಿಂದ ಪ್ರಕ್ಷೇಪಿತ ಜ್ಞಾನದ ಪರಿಣಾಮ. ಸುಮ್ಮನಿರುವುದು ನನ್ನ ಸ್ವಭಾವವಲ್ಲ. ಹಾಗು ನನ್ನ ಬುದ್ಧಿ, ತಿಳುವಳಿಕೆ, ತರ್ಕಗಳಿಗೆ ಒಪ್ಪುವಂತೆ, ವಿಜ್ಞಾನದ ಆಧಾರದಲ್ಲಿ, ಸಮಾಜದಲ್ಲಿ ಅಸಮತೋಲನವನ್ನು ಬೆಳೆಸುತ್ತಿರುವವರ ಮುಖವಾಡವನ್ನು ಕಳಚುವ ಪ್ರಯತ್ನವು ನನ್ನ ಆಯಸ್ಕಾತದಂತೆ ಸೆಳೆಯಿತು. ಇಂತಹ ಮಹತ್ ಕಾರ್ಯವನ್ನು ಮಾಡುತ್ತಾ ಭಾರತ ಮಾತೆಯ ಸೇವೆಯಲ್ಲಿ ತಮ್ಮ ಜೀವನವನ್ನೇ ಅರ್ಪಣೆ ಮಾಡಿದ ಶ್ರೀಯುತ ರಾಜೀವ್ ದೀಕ್ಷಿತರ ಅನೇಕ ಭಾಷಣಗಳನ್ನು ಕನ್ನಡಕ್ಕೆ ಅನುವಾದ ಮಾಡುವುದರ ಮೂಲಕ ನನ್ನ ಅನುವಾದ ಕಾರ್ಯವನ್ನು ಆರಂಭ ಮಾಡಿದ್ದೆ.......... ಈಗ ಈ ಇನ್ನೊಬ್ಬ ರಾಜೀವ್ ಜಾಗತಿಕವಾಗಿ ಧರ್ಮಪರರನ್ನು ಬಡಿದೆಚ್ಚರಿಸುತ್ತಿರುವುದನ್ನು ಕಂಡು ಅತ್ಯಂತ ಉತ್ತೇಜಿತನಾದೆನು.
ಸಮಯವಾದಾಗಲೆಲ್ಲಾ ಇಲ್ಲಿಗೆ ಬಂದು ನಾಲ್ಕು ಮಾತುಗಳನ್ನು ಹಂಚಿಕೊಳ್ಳುವೆ. ನಿಮ್ಮ ಅನಿಸಿಕೆಯನ್ನು ನಿಸ್ಸಂಕೋಚವಾಗಿ ತಿಳಿಸಿ.
ಧನ್ಯವಾದಗಳು.
ನನ್ನ ಇಂದಿನ ಈ 'ಬ್ಲಾಗರ್' ಪುಟಕ್ಕೆ ತಂದದ್ದು ಸನ್ಮಾನ್ಯ ಶ್ರೀಯುತ ರಾಜೀವ್ ಮಲ್ಹೋತ್ರರಿಂದ ಪ್ರಕ್ಷೇಪಿತ ಜ್ಞಾನದ ಪರಿಣಾಮ. ಸುಮ್ಮನಿರುವುದು ನನ್ನ ಸ್ವಭಾವವಲ್ಲ. ಹಾಗು ನನ್ನ ಬುದ್ಧಿ, ತಿಳುವಳಿಕೆ, ತರ್ಕಗಳಿಗೆ ಒಪ್ಪುವಂತೆ, ವಿಜ್ಞಾನದ ಆಧಾರದಲ್ಲಿ, ಸಮಾಜದಲ್ಲಿ ಅಸಮತೋಲನವನ್ನು ಬೆಳೆಸುತ್ತಿರುವವರ ಮುಖವಾಡವನ್ನು ಕಳಚುವ ಪ್ರಯತ್ನವು ನನ್ನ ಆಯಸ್ಕಾತದಂತೆ ಸೆಳೆಯಿತು. ಇಂತಹ ಮಹತ್ ಕಾರ್ಯವನ್ನು ಮಾಡುತ್ತಾ ಭಾರತ ಮಾತೆಯ ಸೇವೆಯಲ್ಲಿ ತಮ್ಮ ಜೀವನವನ್ನೇ ಅರ್ಪಣೆ ಮಾಡಿದ ಶ್ರೀಯುತ ರಾಜೀವ್ ದೀಕ್ಷಿತರ ಅನೇಕ ಭಾಷಣಗಳನ್ನು ಕನ್ನಡಕ್ಕೆ ಅನುವಾದ ಮಾಡುವುದರ ಮೂಲಕ ನನ್ನ ಅನುವಾದ ಕಾರ್ಯವನ್ನು ಆರಂಭ ಮಾಡಿದ್ದೆ.......... ಈಗ ಈ ಇನ್ನೊಬ್ಬ ರಾಜೀವ್ ಜಾಗತಿಕವಾಗಿ ಧರ್ಮಪರರನ್ನು ಬಡಿದೆಚ್ಚರಿಸುತ್ತಿರುವುದನ್ನು ಕಂಡು ಅತ್ಯಂತ ಉತ್ತೇಜಿತನಾದೆನು.
ಸಮಯವಾದಾಗಲೆಲ್ಲಾ ಇಲ್ಲಿಗೆ ಬಂದು ನಾಲ್ಕು ಮಾತುಗಳನ್ನು ಹಂಚಿಕೊಳ್ಳುವೆ. ನಿಮ್ಮ ಅನಿಸಿಕೆಯನ್ನು ನಿಸ್ಸಂಕೋಚವಾಗಿ ತಿಳಿಸಿ.
ಧನ್ಯವಾದಗಳು.